ಜೆಡಿಎಸ್ ಎಂ ಎಲ್ ಸಿ, ಟಿ ಎ ಶರವಣ ಮುಂಬರುವ ಚುನಾವಣೆ 2018ರ ಬಗ್ಗೆ ಏನ್ ಹೇಳ್ತಾರೆ? | Oneindia Kannada

By : Oneindia Kannada

Published On: 2017-12-02

95 Views

05:57

T.A. Sharavana, the right hand of H D Deve Gowda and the man behind Appaji Canteen, is not just the gold merchant or part time politician. The short man has tall ambitions. He has no doubt that H D Kumaraswamy will rule the Karnataka after assembly elections in 2018. Sharavana has clearly set his eyes on assembly election and serve the poor people of Karnataka. An Exclusive interview with T A Sharavana, MLC and spokes person of JDS.

ಟಿ.ಎ.ಶರವಣ ಸಂದರ್ಶನ : ಎಚ್ಡಿಕೆ ಸಿಎಂ ಆಗುವುದನ್ನು ಯಾರೂ ತಪ್ಪಿಸಲಾರರು. ಚಿನ್ನದ ವ್ಯಾಪಾರಿಯಾಗಿ, ಸಮಾಜಸೇವಕನಾಗಿ, ಜೆಡಿಎಸ್ ವಕ್ತಾರನಾಗಿ, ದೇವೇಗೌಡರ ಆತ್ಮೀಯನಾಗಿ ಗುರುತಿಸಿಕೊಂಡಿರುವ ಕುಳ್ಳದೇಹದ ಟಿಎ ಶರವಣ ಅವರಲ್ಲಿ ಬೆಟ್ಟದಷ್ಟು ಆಕಾಂಕ್ಷೆಗಳಿವೆ. ಅವುಗಳಲ್ಲಿ ಕುಮಾರಣ್ಣನನ್ನು ಮುಖ್ಯಮಂತ್ರಿ ಪಟ್ಟದ ಮೇಲೆ ಕೂಡಿಸುವುದು ಮತ್ತು ತಾವೇ ಸ್ವತಃ ವಿಧಾನಸೌಧದ ಮೆಟ್ಟಿಲೇರುವುದೂ ಒಂದು. ದೇವೇಗೌಡರಿಗಾಗಿ ಮತ್ತು ಕುಮಾರಣ್ಣನಿಗಾಗಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿರುವ, ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲಿಕ, ಆರ್ಯ ವೈಶ್ಯ ಸಮಾಜದ ಧುರೀಣ ಶರವಣ ಅವರು ಒನ್ಇಂಡಿಯಾ ಕನ್ನಡ ಕಚೇರಿಗೆ ಆಗಮಿಸಿ, ಮುಂದಿನ ಚುನಾವಣೆ, ಜೆಡಿಎಸ್ ಸಾಮರ್ಥ್ಯದ ಬಗ್ಗೆ ನಿರರ್ಗಳವಾಗಿ ಮಾತನಾಡಿದ್ದಾರೆ.ಬಡವರಿಗಾಗಿ ಹಗಲಿರುಳೂ ಶ್ರಮಿಸುತ್ತಿರುವ 'ಟೈಗರ್' ಎಚ್ ಡಿ ಕುಮಾರಸ್ವಾಮಿ ಅವರು ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಯಾವುದೇ ಪಕ್ಷಗಳ ಹಂಗಿಲ್ಲದೆ ಜಾತ್ಯತೀತ ಜನತಾದಳ ಸ್ವಸಾಮರ್ಥ್ಯದಿಂದ ಸ್ಪಷ್ಟ ಬಹುಮತ ಪಡೆಯಲಿದೆ. ಇದು ನನ್ನ ಮಾತಲ್ಲ, ಇಡೀ ರಾಜ್ಯದ ಜನತೆಯ ಇಚ್ಛೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Trending Videos - 19 April, 2024

RELATED VIDEOS

Recent Search - April 19, 2024