ಹೇರ್ ಸ್ಟೈಲ್ ಜೊತೆಗೆ ದಿವಾಕರ್ ಬುದ್ಧಿ ಕೂಡ ಬದಲಾಗಿದೆ | Filmibeat Kannada

By : Filmibeat Kannada

Published On: 2017-11-27

441 Views

02:13

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಸ್ಪರ್ಧಿ ದಿವಾಕರ್ ಮೊದಲೆರಡು ವಾರ ಹೀಗಿರಲಿಲ್ಲ. ಮೊದಲೆರಡು ವಾರ ದಿವಾಕರ್ ರವರಲ್ಲಿ ಮುಗ್ಧತೆ ಇತ್ತು. ಸ್ವಲ್ಪ ಒರಟು ಸ್ವಭಾವ ಇದ್ದರೂ, ಅನ್ಯಾಯದ ವಿರುದ್ಧ ದನಿ ಎತ್ತುತ್ತಿದ್ದರು. ತಮ್ಮ ಆಪ್ತ ಪರ ನಿಲ್ಲುತ್ತಿದ್ದರು. ಆದ್ರೀಗ, ದಿವಾಕರ್ ಹಾಗಿಲ್ಲ.! ಮೊದಲಿನಿಂದಲೂ ತಮ್ಮ ಪರ ಇದ್ದ ರಿಯಾಝ್ ಜೊತೆ ದಿವಾಕರ್ ಜಗಳ ಮಾಡಿಕೊಂಡಿದ್ದಾರೆ. ತಮ್ಮ 'ಗಾರ್ಡನ್ ಏರಿಯಾ' ಗುಂಪಿನಲ್ಲಿ ಇರುವ ಜಯಶ್ರೀನಿವಾಸನ್ ಜೊತೆಗೂ ಕಿತ್ತಾಡಿಕೊಂಡಿದ್ದಾರೆ. ನಿವೇದಿತಾ ಮೇಲೆ ಸುಮ್ಮನೆ ಕೋಪಿಸಿಕೊಂಡಿದ್ದಾರೆ.ದಿವಾಕರ್ ರವರ ಈ ವರ್ತನೆ ಬಗ್ಗೆ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಮಾತನಾಡಿದ್ದು ಹೀಗೆ...ಕಳೆದ ವಾರ ನಿವೇದಿತಾ ಕ್ಯಾಪ್ಟನ್ ಆಗಿದ್ದಾಗ, ನಿವೇದಿತಾ ಹಾಗೂ ದಿವಾಕರ್ ನಡುವೆ ಜಟಾಪಟಿ ನಡೆಯಿತು. ನಿವೇದಿತಾ 'ನಾನ್ ಸೆನ್ಸ್' ಎಂದಿದ್ದನ್ನ ತಪ್ಪಾಗಿ ಅರ್ಥೈಸಿದ ದಿವಾಕರ್, ''ಸ್ಟುಪಿಡ್'' ಎಂದು ಬೈದರು ಅಂತ ನಿವೇದಿತಾ ಮೇಲೆ ಮುನಿಸಿಕೊಂಡಿದ್ದರು. ಪದೇ ಪದೇ ನಿವೇದಿತಾ ಕ್ಷಮೆ ಕೇಳಿದರೂ, ದಿವಾಕರ್ ಕೋಪ ಕಮ್ಮಿ ಆಗಲಿಲ್ಲ. ಈ ಬಗ್ಗೆ ಸುದೀಪ್ ಹೇಳಿದ್ದು ಹೀಗೆ....


Bigg Boss Kannada 5: big boss is a one of the big reality show in colors super, Bigg Boss Kannada 5: Week 6: Sudeep advices Diwakar.watch this video

Trending Videos - 12 May, 2024

RELATED VIDEOS

Recent Search - May 12, 2024