ಡಿಐಜಿ ರೂಪಾರವರು 20 ಕೋಟಿ ಮಾನನಷ್ಟ ಮೊಕದ್ದಮೆ ಬೆನ್ನಿಗೆ ಎಸಿಬಿ ತನಿಖೆಗೆ ಆಗ್ರಹ | Oneindia Kannada

By : Oneindia Kannada

Published On: 2017-11-29

812 Views

02:07

ಮಾನನಷ್ಟ ಮೊಕದ್ದಮೆ ಬೆನ್ನಲ್ಲೇ ಎಸಿಬಿ ತನಿಖೆಗೆ ಡಿ. ರೂಪಾ ಆಗ್ರಹ. : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ಬಯಲಿಗೆಳೆದಿದ್ದ ಡಿಐಜಿ ಡಿ. ರೂಪಾ ಈ ಸಂಬಂಧ ಎಸಿಬಿ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ಡಿ. ರೂಪಾ ವಿರುದ್ಧ ಬಂಧೀಖಾನೆ ವಿಭಾಗದ ಮುಖ್ಯಸ್ಥರಾಗಿದ್ದು ನಿವೃತ್ತರಾಗಿರುವ ಎಂಎನ್ ಸತ್ಯನಾರಾಯಣ ರಾವ್ 20 ಕೋಟಿ ರೂಪಾಯಿ ಮೊತ್ತದ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬೆನ್ನಿಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.ಜೈಲಿನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಎಸಿಬಿ ತನಿಖೆಯಾಗಬೇಕು ಎಂದು ರೂಪಾ ಒತ್ತಾಯಿಸಿದ್ದಾರೆ. "ಜೈಲಿನಲ್ಲಿ ಅಕ್ರಮಗಳು ನಡೆದಿವೆ ಮತ್ತು ಕೆಲವು ಖೈದಿಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗಿತ್ತು ಎಂಬುದು ವಿನಯ್ ಕುಮಾರ್ ವರದಿಯಲ್ಲಿ ಬಹಿರಂಗವಾಗಿದೆ. ಇದೀಗ ಯಾಕೆ ವಿಶೇಷ ಸಲತ್ತುಗಳನ್ನು ನೀಡಲಾಗಿತ್ತು ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ ಮತ್ತು ಈ ಕುರಿತು ಎಸಿಬಿ ತನಿಖೆ ನಡೆಯಬೇಕು. ನಾನು ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ ಮತ್ತು ಈ ಪ್ರಕರಣದಲ್ಲಿ ಎಸಿಬಿ ತನಿಖೆ ನಡೆಯಬೇಕು ಎಂದು ಆಗ್ರಹಿಸುತ್ತೇನೆ," ಎಂದು ಅವರು ಹೇಳಿದ್ದಾರೆ.
Karnataka IPS officer D Roopa who exposed irregularities in Bengaluru central jail has now demanded an Anti Corruption Bureau probe into the matter. Former Prisons DIG Roopa has been slapped with a Rs 20 crore defamation case by her former boss and prisons chief Satyanarayana.

Trending Videos - 27 April, 2024

RELATED VIDEOS

Recent Search - April 27, 2024