ಕುರುಕ್ಷೇತ್ರ ಸಿನಿಮಾದ ಶೂಟಿಂಗ್ ನಿಂದ ಬೇಸರದಲ್ಲಿ ವಾಪಾಸ್ ಬಂದ ದರ್ಶನ್ | Filmibeat Kannada

By : Filmibeat Kannada

Published On: 2018-01-11

4.5K Views

01:26

Darshan starrer Kurukshetra Cinema shooting has completed & Darshan returned from Ramoji Film City, Hyderabad. But after returning from Hyderabad, Darshan feels very sad. Watch video to know the reason.


ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಜೆಟ್ ನಲ್ಲಿ ತಯಾರಾಗುತ್ತಿರುವ ಸಿನಿಮಾ 'ಕುರುಕ್ಷೇತ್ರ'. ಇದು ದರ್ಶನ್ ರವರ 50 ನೇ ಸಿನಿಮಾ ಬೇರೆ. ಹೀಗಾಗಿ, 'ಕುರುಕ್ಷೇತ್ರ' ಸಿನಿಮಾ ಸೆಟ್ಟೇರಿದಾಗಿನಿಂದಲೂ ಸಿಕ್ಕಾಪಟ್ಟೆ ಸದ್ದು-ಸುದ್ದಿ ಮಾಡುತ್ತಲಿದೆ. ಕಳೆದ ತಿಂಗಳಿನಿಂದ ಸತತವಾಗಿ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ 'ಕುರುಕ್ಷೇತ್ರ' ಚಿತ್ರದ ಚಿತ್ರೀಕರಣ ನಡೆಯುತ್ತಿದೆ.ಕುರುಕ್ಷೇತ್ರ' ಚಿತ್ರದ ಚಿತ್ರೀಕರಣಕ್ಕಾಗಿ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ 18-20 ಸೆಟ್ ಗಳನ್ನು ಅದ್ಧೂರಿಯಾಗಿ ನಿರ್ಮಿಸಲಾಗಿದೆ. 'ಕುರುಕ್ಷೇತ್ರ' ಚಿತ್ರದ ಬಹುತೇಕ ಚಿತ್ರೀಕರಣ ಈಗಾಗಲೇ ಕಂಪ್ಲೀಟ್ ಆಗಿದೆ.ಮಾರ್ಚ್ ಮೊದಲ ವಾರ 'ಕುರುಕ್ಷೇತ್ರ' ಬಿಡುಗಡೆ ಆಗುವ ಸಾಧ್ಯತೆ ಇದೆ.ಇನ್ನು ಇದೀಗ ಕುರುಕ್ಷೇತ್ರ ಸಿನಿಮಾದ ಶೂಟಿಂಗ್ ಸಂಪೂರ್ಣವಾಗಿದ್ದು ದರ್ಶನ್ ಹೈದರಾಬಾದ್ ನ ರಾಮೋಜಿ ಫಿಲಂ ಸಿಟಿಯಿಂದ ತಾಯ್ನಾಡಿಗೆ ವಾಪಸಾಗಿದ್ದಾರೆ. ದರ್ಶನ್ ವಾಪಾಸ್ ಬಂದಾಗಿನಿಂದಲೂ ತುಂಬಾ ಬೇಸರವಾಗಿದ್ದರೆ. ಕಾರಣ ತಿಳಿಯಲು ಈ ವಿಡಿಯೋ ನೋಡಿ.

Trending Videos - 20 May, 2024

RELATED VIDEOS

Recent Search - May 20, 2024