4-1-2019- ಶುಕ್ರವಾರದ ದಿನ ಭವಿಷ್ಯ | Boldsky

By : Boldsky

Published On: 2019-01-04

77 Views

06:39

ಶುಕ್ರವಾರದ ದಿನ ಲಕ್ಷ್ಮಿ ದೇವತೆಯನ್ನು ಪ್ರಸನ್ನಗೊಳಿಸಿದರೆ ಜೀವನ ಪೂರ್ತಿ ನಿಮಗೆ ಧನ- ಧಾನ್ಯದ ಕೊರತೆಯೇ ಆಗುವುದಿಲ್ಲ. ಸಿರಿವಂತಿಕೆ ನಿಮ್ಮದಾಗುತ್ತದೆ. ಶುಕ್ರವಾರ ಲಕ್ಷ್ಮಿಯ ದಿನವೆಂದು ಹೇಳಲಾಗುತ್ತದೆ. ಹಾಗಾಗಿ ಶುಕ್ರವಾರ ಲಕ್ಷ್ಮಿದೇವಿಯನ್ನು ಸಂತುಷ್ಟಗೊಳಿಸಿದರೆ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ಲಕ್ಷ್ಮೀದೇವಿ ಅಂದರೆ ಸಿರಿಯ ಅಧಿದೇವಿ. ಆಕೆಯ ಅರ್ಚನೆ, ಪೂಜೆಗಳಿಂದ ಸಕಲ ಸಂಪತ್ತನ್ನು ಹೆಚ್ಚಿಸಿಕೊಳ್ಳಬಹುದು ಎಂಬ ನಂಬಿಕೆ ಸಾರ್ವತ್ರಿಕವಾಗಿದೆ. ವಿಜೃಂಭಣೆಯಿಂದ ಉಳ್ಳವರು ಆಚರಿಸಿದರೆ, ಸರಳವಾಗಿ, ಸಾಮೂಹಿಕವಾಗಿ ಆಚರಿಸಿ ದೇವಿಯ ಕೃಪೆಗೆ ಭಾಜನರಾಗುವವರು ಧಾರಾಳವಾಗಿದ್ದಾರೆ. ನಮ್ಮ ಮನಸ್ಸು ದುರ್ಬಲ ಅಥವಾ ಬೇಸರದಲ್ಲಿರುವಾಗ ಸನ್ನಿವೇಶಗಳೇ ಸಮಸ್ಯೆಗಳಾಗಿ ಪರಿವರ್ತನೆಯಾಗುತ್ತದೆ. ಅದೇ ಮನಸ್ಸು ಸಮತೋಲನದಲ್ಲಿದ್ದಾಗ ಸನ್ನಿವೇಶಗಳು ಸವಾಲಾಗಿ ಕಾಣುತ್ತದೆ. ಅದೇ ಮನಸ್ಸು ಪ್ರಬಲವಾಗಿದ್ದಾಗ ಸನ್ನಿವೇಶಗಳು ಅವಕಾಶಗಳಾಗಿ ಬದಲಾಗುತ್ತವೆ. ನಿಜ, ನಮ್ಮ ಮನಸ್ಸು ಯಾವ ಸ್ಥಿತಿಯಲ್ಲಿದೆ ಎನ್ನುವುದರ ಆಧಾರದ ಮೇಲೆಯೇ ನಮ್ಮ ಸುತ್ತಲಿನ ಪರಿಸರ ಹಾಗೂ ಸನ್ನಿವೇಶಗಳನ್ನು ನಾವು ಸ್ವೀಕರಿಸುತ್ತೇವೆ. ಗೊಂದಲಮಯವಾದ ಮನಸ್ಸಿನಲ್ಲಿ ಎಲ್ಲಾ ವಿಚಾರವನ್ನು ಸ್ವೀಕರಿಸುವ ಬದಲು, ಮನಸ್ಸನ್ನು ಸದಾ ಶಾಂತ ಹಾಗೂ ಸಂತೋಷ ದಲ್ಲಿರಿಸಿಕೊಂಡು, ಸನ್ನಿವೇಶಗಳನ್ನು ಸ್ವೀಕರಿಸಿದರೆ ಬದುಕು ಸರಳ ಹಾಗೂ ಸುಖಮಯವಾಗಿ ಕೂಡಿರುತ್ತದೆ. ಆಗಲೇ ನಾವು ಸುಂದರವಾದ ಜೀವನದ ಅನುಭವ ಪಡೆಯಬಹುದು. ನಿಮ್ಮ ಬದುಕಿನಲ್ಲಿ ಯಾವೆಲ್ಲಾ ಬದಲಾವಣೆಗಳು ಉಂಟಾಗುತ್ತವೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ವಿಡಿಯೋ ಪರಿಶೀಲಿಸಿ.

Trending Videos - 29 April, 2024

RELATED VIDEOS

Recent Search - April 29, 2024