ಬಿಗ್ ಬಾಸ್ ಕನ್ನಡ ಸೀಸನ್ 5 : ಎಲ್ಲಾ ಸ್ಪರ್ಧಿಗಳ ಮೇಲೆ ಗರಂ ಆದ ಸುದೀಪ್ | Filmibeat kannada

By : Filmibeat Kannada

Published On: 2017-11-20

558 Views

02:02

ಸೂಕ್ತ ಕಾರಣ ಕೊಟ್ಟು ನಾಮಿನೇಟ್ ಮಾಡದವರಿಗೆ ಮಾತಲ್ಲೇ ಪೆಟ್ಟು ಕೊಟ್ಟ ಸುದೀಪ್.! 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಐದನೇ ವಾರ ಓಪನ್ ನಾಮಿನೇಷನ್ ಪ್ರಕ್ರಿಯೆ ನಡೆಯಿತು. ತಾವು ನಾಮಿನೇಟ್ ಮಾಡುವ ಇಬ್ಬರು ಸದಸ್ಯರ ಭಾವಚಿತ್ರವನ್ನ, ಅವರ ಎದುರಿಗೆ ಸ್ಪರ್ಧಿಗಳು ಅಗ್ನಿಕುಂಡಕ್ಕೆ ಸಮರ್ಪಿಸಬೇಕಿತ್ತು. ಈ ಪ್ರಕ್ರಿಯೆಯಲ್ಲಿ ಕೆಲವರು ಸೂಕ್ತ ಕಾರಣ ನೀಡಲಿಲ್ಲ. ಸೆಲೆಬ್ರಿಟಿ ಸ್ಪರ್ಧಿಗಳೆಲ್ಲ ಜನಸಾಮಾನ್ಯ ಸ್ಪರ್ಧಿಗಳನ್ನೇ ಟಾರ್ಗೆಟ್ ಮಾಡಿದರು. ಇನ್ನೂ ಜನಸಾಮಾನ್ಯ ಸ್ಪರ್ಧಿಗಳು ಕೂಡ ಸೆಲೆಬ್ರಿಟಿ ಸ್ಪರ್ಧಿಗಳನ್ನೇ ನಾಮಿನೇಟ್ ಮಾಡಿದರು.ಇದನ್ನ ಗಮನಿಸಿದ ಕಿಚ್ಚ ಸುದೀಪ್, 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಎಲ್ಲ ಸ್ಪರ್ಧಿಗಳಿಗೂ ಬೆಂಡೆತ್ತಿದರು. ''ಓಪನ್ ನಾಮಿನೇಷನ್ ನಲ್ಲಿ ಮಕ್ಕಳ ತರಹ ಆಡಿದ್ದು ಯಾಕೆ.? ಒಳಗಿರುವವರೆಲ್ಲ ಹೊರಗಡೆ ಇರುವವರನ್ನ ನಾಮಿನೇಟ್ ಮಾಡುತ್ತೀರಿ. ಹೊರಗಡೆ ಇರುವವರೆಲ್ಲ ಒಳಗಡೆ ಇರುವವರನ್ನ ನಾಮಿನೇಟ್ ಮಾಡುತ್ತೀರಿ. ಅವರು ನಾಮಿನೇಟ್ ಮಾಡಿದರು ಅಂತ ಇವರು, ಇವರು ನಾಮಿನೇಟ್ ಮಾಡಿದರು ಅಂತ ಅವರು. ಕಾರಣ ಬಹಳ ಕಮ್ಮಿ ಜನ ಕರೆಕ್ಟಾಗಿ ಕೊಟ್ರಿ. ಇನ್ನೂ ಕೆಲವರು ಮಕ್ಕಳಿಗಿಂತ ಕಡೆ ರೀಸನ್ ಕೊಟ್ರಿ'' ಎಂದು ಓಪನ್ ನಾಮಿನೇಷನ್ ಪ್ರಕ್ರಿಯೆ ಬಗ್ಗೆ ಸುದೀಪ್ ಬೇಸರ ವ್ಯಕ್ತಪಡಿಸಿದರು.
Bigg Boss Kannada 5: Week 5: Sudeep speaks about open nomination process. Sudeep was angry on all the contestants for not giving the proper reason for nominating the contestants.

Trending Videos - 30 April, 2024

RELATED VIDEOS

Recent Search - April 30, 2024