ವಿಷ್ಣು ಸ್ಮಾರಕ ವಿವಾದ ಬಗೆಹರಿಸಲು ಸುದೀಪ್ ಕೊಟ್ಟ 4 ಸಲಹೆಗಳು ಇವೆ | Filmibeat Kannada

By : Filmibeat Kannada

Published On: 2017-12-11

2.9K Views

02:25

ಸಾಹಸ ಸಿಂಹ ಡಾ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಕನ್ನಡದ ನಟ ಕಿಚ್ಚ ಸುದೀಪ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ, ಚರ್ಚೆ ನಡೆಸಿದ್ದಾರೆ. ವಿಷ್ಣು ಸ್ಮಾರಕದ ವಿವಾದವನ್ನ ಬಗೆಹರಿಸುವ ಬಗ್ಗೆ ಸಿಎಂ ಜೊತೆ ಮಾತನಾಡಿದ ಸುದೀಪ್ 4 ಪ್ರಮುಖ ಸಲಹೆಗಳನ್ನ ಸರ್ಕಾರಕ್ಕೆ ನೀಡಿದ್ದಾರೆ. ಸುದೀಪ್ ಹಾಗೂ ಡಾ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ ಅವರು ನೀಡಿರುವ ಈ ಸಲಹೆಗಳನ್ನ ಸರ್ಕಾರ ಅನುಸರಿಸಿದ್ದಲ್ಲಿ, ವಿಷ್ಣು ಸ್ಮಾರಕ ವಿವಾದ ಅಂತ್ಯವಾಗಿ ಸ್ಮಾರಕ ನಿರ್ಮಾಣ ಕಾರ್ಯ ಸುಗಮವಾಗಬಹುದು ಎಂಬ ಆಶಯ ಕಿಚ್ಚ ಸುದೀಪ್ ಅವರದ್ದು.ಇದರ ಜೊತೆಗೆ ಸುದೀಪ್ ಅವರು ಕೆಲವು ಮನವಿಯನ್ನ ಕೂಡ ಮಾಡಿದ್ದಾರೆ. ಹಾಗಿದ್ರೆ, ಸರ್ಕಾರಕ್ಕೆ ಸುದೀಪ್ ನೀಡಿರುವ ಆ ಸಲಹೆಗಳೇನು? ಸಲಹೆ-1: ಅಭಿಮಾನ್ ಸ್ಟುಡಿಯೋದಲ್ಲಿ ಸರ್ಕಾರ ನೀಡಿರುವ ಎರಡು ಎಕರೆ ಬದಲು, ಒಂದು ಅಥವಾ ಅರ್ಧ ಎಕರೆ ಜಾಗವನ್ನ ಮಂಜೂರು ಮಾಡುವುದು.

Kannada Actor Sudeep met chief minister Siddaramaiah and discuss about dr vishnuvardhan memorial. and he gave some tips to siddaramiha

Trending Videos - 3 May, 2024

RELATED VIDEOS

Recent Search - May 3, 2024