ಬೆಂಗಳೂರು, ಜನವರಿ 10 : 25 ವರ್ಷದಿಂದ ರಾಜಕಾರಣದಲ್ಲಿದ್ದಾರೆ ಬಿಬಿಎಂಪಿ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ. ಪ್ರತಿಪಕ್ಷ ನಾಯಕರಾಗಿ, ಆಡಳಿತ ಪಕ್ಷದ ನಾಯಕರಾಗಿ, ಪಾಲಿಕೆಯ ಮೇಯರ್ ಆಗಿರುವ ಅವರು ಈಗ ವಿಧಾನಸಭೆ ಪ್ರವೇಶಿಸಿಸುವ ಆಕಾಂಕ್ಷೆ ಹೊಂದಿದ್ದಾರೆ. ಕಟ್ಟೆ ಸತ್ಯಾನಾರಾಯಣ ಅವರು ಪ್ರಸ್ತುತ ಬಸವನಗುಡಿ ಕ್ಷೇತ್ರದ ಬಿಬಿಎಂಪಿ ಸದಸ್ಯರು. 2018ರ ವಿಧಾನಸಭೆ ಚುನಾವಣೆಯಲ್ಲಿ ಬಸವನಗುಡಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಿ ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಕ್ಷೇತ್ರದ ಹಾಲಿ ಶಾಸಕರು ಬಿಜೆಪಿಯವರೇ ಆದ ರವಿ ಸುಬ್ರಮಣ್ಯ.
ಗೋಕಾಕ್ ಚಳವಳಿ ಸಮಯದಲ್ಲಿ ನಾವು 'ಕಟ್ಟೆ ಬಳಗ'ವನ್ನು ಆರಂಭಿಸಿದೆವು. ಬಳಗ ಆರಂಭವಾಗಿ 33 ವರ್ಷಗಳು ಕಳೆದವು. ಸಮಾಜ ಸೇವೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಕಟ್ಟೆ ಭವನ ಕಟ್ಟೆ ಬಳಗದ ಚಟುವಟಿಕೆಗಳಿಗೆ ವೇದಿಕೆಯಾಗಿದೆ. ಯೋಗ, ವೇದ, ಡ್ಯಾನ್ಸ್ ಕ್ಲಾಸ್ ಮುಂತಾದವುಗಳನ್ನು ನಡೆಲಾಗುತ್ತಿದೆ.33 ವರ್ಷ ಆದ ಹಿನ್ನಲೆಯಲ್ಲಿ ಒಂದು ಕಾರ್ಯಕ್ರಮ ಮಾಡಲು ಮುಂದಾಗಿದ್ದೇವೆ. ಜನವರಿ 28ರಂದು ಈ ಕುರಿತು ಸಭೆ ನಡೆಸಲಿದ್ದೇವೆ.